ಈ ರಾತ್ರಿ

ಎಲೆಗಳು ಉದುರಿ ಅಂಗಳದ
ತುಂಬೆಲ್ಲಾ ಹರಡಿ ಹಾಸಿ
ಮಳೆ ನೆನೆದ ರಾತ್ರಿ
ಎದೆಯ ನದಿಯ ತುಂಬ ನೀರು ಅಲೆಗಳು

ಮರಿಹಕ್ಕಿಗಳಂತೆ ಮುದುರಿದ
ನೆನಪುಗಳು ಆಕಾಶದಲ್ಲಿ
ಕಳಚಿಬಿದ್ದ ತಾರೆಗಳು
ಕವಳದ ಎಚ್ಚರದ ತುಂಬ ಕನಸುಗಳು

ಅಚ್ಚ ಅಳಿಯದೇ ಉಳಿದುಹೋದ
ಗಾಯದ ಕಲೆಯ ಕೆರೆತ
ಮೆಲುಕುಹಾಕಿದರೆ ಬಹಳ ಪ್ರಳಯ
ಚಳಿಗೆ ಥರಗುಟ್ಟಿದ ಮನಸ್ಸು

ಅಂಗಳದಲಿ ತೇಲಿ ಜೀಕಿದ ಉಯ್ಯಾಲೆ
ಕಂಬಗಳ ಕೌನೆರಳು ಹರಡಿ
ಬಿಸಿ ಹಾಯ್ದ ರಾತ್ರಿ ಬಂಧನ
ಸೆಳೆತದ ಮನೆ ಹನಿಗಳ ಸ್ನಾನ

ರಾತ್ರಿ ಎಚ್ಚರದಲಿ ವಿರಹದ ನೋವು
ಮತ್ತೆ ಕಂಬಳಿಯೊಳಗೆ ಹುದುಗಿದ ಮಾತು
ಮೋಡಗಳು ಸುರಿದ ಖಾಲಿಯಾದ ಆಕಾಶ
ನಿಂತರೂ ಕುಳಿತರೂ ತೊಟ್ಟಿಕ್ಕುವ ಧೂಮಕೇತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರಂಜಿ ಕೆರೆಯ ಬಳಿ
Next post ಸೂರ್ಯೋಪಾಸನೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys